ಹಾಸನ : ಅರಣ್ಯ ಇಲಾಖೆಯ ಜೀಪನ್ನು ಅಟ್ಟಾಡಿಸಿದ ಕಾಡಾನೆ
ಜೀಪ್ ರಿವರ್ಸ್ ತೆಗೆದು ಪ್ರಾಣ ಉಳಿಸಿಕೊಂಡ ಅರಣ್ಯ ಇಲಾಖೆ ಇಟಿಎಫ್ ಸಿಬ್ಬಂದಿ
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಮುವ್ವಾಲ ಗ್ರಾಮದಲ್ಲಿ ಘಟನೆ
ಕಳೆದ ಒಂದು ದಿನದ ಹಿಂದೆ ಓಲ್ಡ್ ಬೆಲ್ಟ್ನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಸಲಾಗಿತ್ತು
ಗುಂಪಿನಿಂದ ಬೇರ್ಪಟ್ಟಿದ್ದರಿಂದ ರೊಚ್ಚಿಗೆದ್ದಿರುವ ಕಾಡಾನೆ
ಬೆಳಗ್ಗೆ ಐವರ ಮೇಲೆ ದಾಳಿ ಮಾಡಿದ್ದ ಕಾಡಾನೆ
ಬೆಳಗ್ಗೆಯಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ ಹೆಣ್ಣಾನೆ
ಯಾವುದೇ ಅನಾಹುತವಾಗದಂತೆ ಹೆಣ್ಣಾನೆ ಬೆನ್ನುಬಿದ್ದಿರುವ ಅರಣ್ಯ ಇಲಾಖೆ
ಕಾಡಾನೆ ಚಲನವಲನ ಗಮನಿಸಿ ಮಾಹಿತಿ ನೀಡುತ್ತಿರುವ ಇಟಿಎಫ್ ಸಿಬ್ಬಂದಿ
ಈ ವೇಳೆ ಸಿಬ್ಬಂದಿ ಇದ್ದ ಜೀಪ್ ಮೇಲೆ ದಾಳಿ ಮಾಡಿದ ಕಾಡಾನೆ
ಕೂಡಲೇ ಜೀಪ್ ಏರಿದ ಇಟಿಎಫ್ ಸಿಬ್ಬಂದಿ
ಕೆಲ ದೂರ ಜೀಪ್ನ್ನು ಅಟ್ಟಿಸಿಕೊಂಡು ಹೋದ ಹೆಣ್ಣಾನೆ

Post a Comment